ಕನ್ನಡಿಗರಿಗೆ ನಮಸ್ಕಾರ,
ಇದೆಂಥ ಬ್ಲಾಗ್ ಎಂದು ಅಚ್ಚರಿಯೇ? ಹೌದು ಸ್ವಾಮಿ.. ಇಂಥದ್ದೊಂದು ಬ್ಲಾಗ್ ನಮಗೆ ಬೇಕು.. ನನ್ನ ಮಂತ್ರ "ಸಿರಿಗನ್ನಡಂ ಗೆಲ್ಗೆ". ಆದರೆ ಇಲ್ಲಿ ನಾನು ಕನ್ನಡವೇ ಉಸಿರಾಗಿರುವ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕಂಡ ಕನ್ನಡ ಫಲಕಗಳು, ಕರೆಯೋಲೆಗಳು ಕರಪತ್ರಗಳು ಮುಂತಾದವುಗಳಲ್ಲಿ ಕಂಡ ತಪ್ಪುಗಳ ಬಗ್ಗೆ ಬರೆಯುತ್ತೇನೆ. ನಮ್ಮ ರಾಜ್ಯದ ರಾಜಧಾನಿಯಲ್ಲಿ ನಡೆಯುತ್ತಿರುವ ಕನ್ನಡದ ಕಗ್ಗೊಲೆಯ ಬಗ್ಗೆ ಬರೆಯುತ್ತೇನೆ.. ಎಲ್ಲಿಯವರೆಗೆ ಈ ರೀತಿಯ ಕಗ್ಗೊಲೆ ನಿಲ್ಲುವುದಿಲ್ಲವೋ ಅಲ್ಲಿಯವರೆಗೆ
"ಸಿರಿಗನ್ನಡಂ ಗಲ್ಲಿಗೆ"...
No comments:
Post a Comment